ಕನ್ನಡನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಚಳವಳಿ ಒಂದು ವಿಸ್ಮಯದ ಸನ್ನಿವೇಶ. ಸಾವಿರಾರು ವರ್ಷಗಳ ಇತಿಹಾಸವಿದ್ದ ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯೊಂದನ್ನು ಅದರಿಂದಾಗಿ ಶೋಷಣೆಗೊಳಗಾದ ಕೆಳವರ್ಗದ ಜನಸಮುದಾಯಗಳೇ ತಿರಸ್ಕರಿಸಿ ಹೊಸ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದು ನಿಜವಾಗಿಯೂ ವಿಸ್ಮಯಕಾರಿಯಾದ ಹಾಗೂ ಚಿರಸ್ಮರಣೀಯವಾದ ಘಟನೆ. ಪ್ರಮುಖ ವಚನಕಾರರಲ್ಲಿ ಒಬ್ಬನಾದ ಅಲ್ಲಮನ ವ್ಯಕ್ತಿತ್ವವು ನಮಗೆ ಗೂಢತರವಾಗಿ ಕಾಣುವುದು. ಅಲ್ಲಮ ಎಂದರೆ ಎಲ್ಲರ ಮನಸ್ಸಿನಲ್ಲಿ ಒಂದು ಚಿತ್ರ ಮೂಡುತ್ತದೆ. ಅಗಾಧತೆ, ಆಳವಾದ ಅನುಭಾವಿಕತೆ, ನಿಷ್ಠುರ ಮನೋಭಾವ, ಭೂಮ ಕಲ್ಪನೆ - ಇವುಗಳನ್ನು ಒಳಗೊಂಡ ವ್ಯಕ್ತಿತ್ವ ಈತನದು. ಅಲ್ಲಮನ ವಚನಗಳ ಅಪೂರ್ವ ಸಂಗ್ರಹವಿದು.

ಡಾ. ಪಿ.ವಿ. ನಾರಾಯಣ

16 other products in the same category:

Product added to compare.