ಕೆ.ಎನ್. ಗಣೇಶಯ್ಯನವರದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಹೆಸರು. ಐತಿಹಾಸಿಕ ಮತ್ತು ವೈಜ್ಞಾನಿಕ ಹಿನ್ನಲೆಯ ಕಥನ ಸಾಹಿತ್ಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ 'ಗಣೇಶ'ಮಾರ್ಗವನ್ನು ತೆರೆದವರು ಇವರು. 'ವಲಯ ಕಲಹ' ಎರಡು ನೀಳ್ಗತೆಗಳನ್ನು ಹೊಂದಿರುವ ಸಂಕಲನ. ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಎಲ್ಲವೂ ಭಾರತೀಯ ಜ್ಞಾನ  ಪ್ರಕಾರದ ಅವಿಭಾಜ್ಯ ಅಂಶಗಳಾಗಿ ಹರಿದು ಬಂದಿರುವುದನ್ನು ಹಿನ್ನಲೆಯಾಗುಳ್ಳ ಕಥೆ ಒಂದಾದರೆ, ಮತ್ತೊಂದು ರಾಷ್ಟ್ರಕೂಟರ ಚರಿತ್ರೆಯ ಸುತ್ತ ಬೆಳೆಸಿದ ನೀಳ್ಗತೆ. ಮಾನವ ಸಮಾಜಜೀವಿ ಆಗಿರದಿದ್ದರೆ ಅವನ ಜೀವನ ಹೇಗಿದ್ದಿರಬಹುದು ಎಂಬ ಜಿಜ್ಞಾಸೆಯನ್ನು ಕುತೂಹಲಕಾರಿಯಾಗಿ ಹೇಳುವಂತ ಕಥನವಿದು. ಎಂದಿನಂತೆ ಗಣೇಶಯ್ಯನವರ ರೋಚಕ ಕಥಾಶೈಲಿ ಇಲ್ಲಿದೆ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.