ಭಾರತದ ಪ್ರಜಾಪ್ರಭುತ್ವ ಜಗತ್ತಿನ ಅತೀ ಎತ್ತರದ ಹಾಗೂ ಬಲಿಷ್ಠ ಪ್ರಜಾಪ್ರಭುತ್ವ. ರಾಜಕೀಯ ವ್ಯವಸ್ಥೆಯಲ್ಲಿ ಒಮ್ಮೊಮ್ಮೆ ಸಾಂವಿಧಾನಕ ಬಿಕ್ಕಟ್ಟುಗಳು, ಸಂದಿಗ್ಧಗಳು ಎದುರಾಗುತ್ತವೆ. ಅದರ ಪರಿಣಾಮ ಸರ್ಕಾರ, ಸಮಾಜ, ಪತ್ರಿಕೆ, ರಾಜಕೀಯ ಪಕ್ಷಗಳ ಮೇಲೂ ಖಂಡಿತ ಆಗುತ್ತದೆ. ಭಾರತದ ಪ್ರಜಾಪ್ರಭುತ್ವದಲ್ಲೂ "Emergency" ತುರ್ತು ಪರಿಸ್ಥಿತಿ ಅಥವಾ ಆಪತ್ ಸ್ಥಿತಿಯಂತಹ ಕಾಲಘಟ್ಟಗಳನ್ನು ಎದುರಿಸಲಾಗಿದೆ. ಈ ಆಪತ್ ಸ್ಥಿತಿಯನ್ನು ಕುರಿತು ಇರಬಹುದಾದ ಸಂದೇಹ, ಗೊಂದಲಗಳಿಗೆ ಉತ್ತರವನ್ನು ನೀಡುವ ಪ್ರಯತ್ನವನ್ನು ಪ್ರಸಿದ್ಧ ರಾಜಕೀಯ ಪಟು ಅಡಗೂರು ಎಚ್. ವಿಶ್ವನಾಥ್ ರವರು ಈ ಕೃತಿಯಲ್ಲಿ ಮಾಡಿದ್ದಾರೆ. ಇದನ್ನು ತುರ್ತು ಪರಿಸ್ಥಿತಿಯ ಒಂದು ಮರು ಅವಲೋಕನವೆನ್ನಬಹುದು.

ಅಡಗೂರು ಎಚ್. ವಿಶ್ವನಾಥ್

16 other products in the same category:

Product added to compare.