"ಕಂಬಾರರ `ಜೋಕುಮಾರ ಸ್ವಾಮಿ' ನಾಟಕವನ್ನು; ಸಮಕಾಲೀನ ವಸ್ತುವಾದ ಉಳುವವನೇ ನೆಲದ ಒಡೆಯ ಎಂಬ ವಸ್ತುವನ್ನು ತೆಗೆದುಕೊಂಡು ಅದನ್ನು ಲೈಂಗಿಕ ಫಲವಂತಿಕೆಯೊಂದಿಗೆ ಹೊಂದಿಸಿ ಕಟ್ಟಲಾಗಿದೆ. ಇಂಥ ವಸ್ತು ಮಾತು ಮತ್ತು ಆಚರಣೆ ಎರಡನ್ನೂ ಒಳಗೊಳ್ಳಬಲ್ಲುದು. ಆದ್ದರಿಂದಲೇ ಈ ಕೃತಿಯಲ್ಲಿ ಮಾತು ಮತ್ತು ಹಾಡು, ಪೂಜೆ ಮತ್ತು ನೃತ್ಯ ಹೊಂದಿಕೊಂಡಿವೆ. ಒಂದರ ಪರಿಣಾಮ, ಇನ್ನೊಂದಕ್ಕೆ ನೆರವಾಗುತ್ತದೆ. ಬಯಲಾಟದ ಮೇಳ, ಮಾತು, ಕುಣಿತಗಳನ್ನುಳ್ಳ ಈ ಕೃತಿ ನಿರ್ದೇಶಕನನ್ನು ನಮ್ಮ ಜಾನಪದ ಪರಂಪರೆಯ ಶೋಧನೆಗೆ ತೊಡಗಿಸುವಂತೆಯೇ, ಪ್ರೇಕ್ಷಕ ತನ್ನ ಬದುಕಿನ ಮುಖ್ಯ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ'' -ಪಿ. ಲಂಕೇಶ್.

ಚಂದ್ರಶೇಖರ ಕಂಬಾರ

16 other products in the same category:

Product added to compare.