ಈ ಕನ್ನಡ ಸಾಹಿತ್ಯ ಚರಿತ್ರೆ ಒಂದು ವಿಶಿಷ್ಟ ಸಂಪುಟವಾಗಿದೆ. ಕ್ರಿ.ಪೂ. 3ನೇ ಶತಮಾನದ ಅಶೋಕನ ಪ್ರಾಕೃತ ಶಾಸನದಲ್ಲಿ ದೊರೆತಿರುವ `ಇಸಿಲ' ಎಂಬ ಮೊಟ್ಟಮೊದಲ ಕನ್ನಡ ಪದದ ಪ್ರಸ್ತಾಪದಿಂದ ಹಿಡಿದು ಕ್ರಿ.ಶ. 20ನೆಯ ಶತಮಾನದವರೆಗಿನ ಸಾಹಿತ್ಯ ಚರಿತ್ರೆ ಇದರ ಮೊದಲ ವಿಭಾಗ. ಇದರಲ್ಲಿ ಜನಪದದ ಸಾಹಿತ್ಯವೂ ಸೇರಿದೆ. ಮುಂದೆ 20ನೇ ಶತಮಾನದಲ್ಲಿ ಆರಂಭಗೊಂಡು ತೀರ ಈಚಿನವರೆಗೆ ಸೃಷ್ಟಿಯಾದ ಆಧುನಿಕ ಸಾಹಿತ್ಯ ಇದರ ಎರಡನೆಯ ಭಾಗ. ಇದರಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳ ವಿವರಗಳಿವೆ. ಅಲ್ಲದೆ ಯಕ್ಷಗಾನ ಸಾಹಿತ್ಯ ಮತ್ತು ಅಮೇರಿಕದಲ್ಲಿ ಕನ್ನಡ ಸಾಹಿತ್ಯ ಎಂಬ ಹೊಸ ವಿಭಾಗಗಳು ಇವೆ. ಈಚೆಗೆ ಹೊರಬಂದಿರುವ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಅಪೂರ್ವ ಸಂಪುಟವಾಗಿದೆ.

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

16 other products in the same category:

Product added to compare.