ಕನ್ನಡದ ಪ್ರಸಿದ್ಧ  ಸಂಸ್ಕೃತಿ ಚಿಂತಕರಾದ ಶಂಬಾಜೋಷಿಯವರು ಭಾಷೆ, ಸಮಾಜ, ವ್ಯಕ್ತಿ, ಸಮುದಾಯ ಮತ್ತು ನಾಡು ಇವುಗಳ ಅಂತರ್ ಸಂಬಂಧಗಳನ್ನು ನಿರಂತರವಾಗಿ ಶೋಧಿಸಿದವರು. ಭಾಷೆಯ ಜೊತೆಯಲ್ಲೇ  ಸಂಸ್ಕೃತಿಯೂ ಅಥವಾ  ಸಂಸ್ಕೃತಿಯ ಭಾಗವಾಗಿಯೇ ಭಾಷೆಯೂ ಬೆಳೆದಿದೆ ಎಂಬ ವಿಕಾಸಶೀಲ ತಿಳುವಳಿಕೆ ಅವರದು.  ಸಂಸ್ಕೃತಿಯಲ್ಲಿ ಬೆರೆತ ತಾರತಮ್ಯಗಳನ್ನು ಬಿಡಿಸಿಯೇ ಕನ್ನಡ ಭಾಷೆಯ ಸಂಬಂಧಗಳನ್ನು ವಿವರಿಸಬೇಕು ಎನ್ನುವ ಮೊಗಳ್ಳಿ ಗಣೇಶ್ ರವರು ಶಂಬಾರವರ ಜೊತೆಗಿನ ಅನುಸಂಧಾನದ ಮೂಲಕ ಕನ್ನಡ ನಾಡುನುಡಿಯ ಕುರಿತಾದ ಆಲೋಚನೆಯನ್ನು ಸಾಮಾಜಿಕ ಚಿಂತನೆಯ ತಳಹದಿಯಲ್ಲಿ ಇಲ್ಲಿ ಮಾಡಿದ್ದಾರೆ.

ಡಾ. ಮೊಗಳ್ಳಿ ಗಣೇಶ್

16 other products in the same category:

Product added to compare.