ವಸುಮತಿ ಉಡುಪರವರ ಬದುಕು ಮಾಯೆಯ ಮಾಟ ಅಂಕಿತ ಪುಸ್ತಕದಿಂದ ಪ್ರಕಟವಾಗಿರುವ ಅವರ ಮೂರನೆಯ ಕಥಾಸಂಕಲನ, ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ ನಿರೂಪಣೆ ನೇರ ಕತೆಗಾರಿಕೆಯಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ.

       ಮಲೆನಾಡಿನ ಪರಿಸರ , ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ' ಬಂದನಾ ಹುಲಿರಾಯ', 'ಅಗ್ನಿದಿವ್ಯ', 'ಮೃಗತೃಷ್ಣಾ', ಪಾತಾಳ ಗರಡಿ; ' ನಮ್ಮ ನಡುವಿನ ಕಾಂತಾಮಣಿಯರು', 'ಅಂತರಂಗದ ಪಿಸುನುಡಿ', ' ಸಂಕ್ರಮಣ' ಇವರ ಪ್ರಮುಖ ಕಥಾ ಸಂಕಲನಗಳು. ಕತೆಗಳಂತೆಯೇ ' ಪರಿವರ್ತನೆ' ' ಸಂಬಂಧಗಳು', 'ವಿಮೋಚನ' ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.

 ಮಹಿಳೆಯರೇ ಕೇಂದ್ರಪತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸಿದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಇವರ ಕಥೆಗಳಲ್ಲಿ ಬರುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು, ಗಟ್ಟಿತನವನ್ನು ಹೊಂದಿರುವಂತದ್ದು.

ವಸುಮತಿ ಉಡುಪ

16 other products in the same category:

Product added to compare.