ಕುತೂಹಲಕಾರಿಯಾದ ಆರಂಭ, ಆವಾಹಿಸಿಕೊಳ್ಳುವ ತಿರುವುಗಳ ಈ ಕಥೆಗಳ ಓಘವು ಸದ್ದಿಲ್ಲದೆ ಹರಿವ ನದಿಯಂತಿದೆ. ವಸ್ತುವಿನಲ್ಲಿ ಬಹುಪಾಲು ಆತ್ಮಕಥಾನಕವೂ,ನಿರ್ವಹಣಾಶೈಲಿಯಲ್ಲಿ ಏಕರೇಖಾತ್ಮವೂ ಆಗಿರುವ ಇವುಗಳ ಹೊರ ಆವರಣವನ್ನು ಕೌಟುಂಬಿಕ-ಸಾಮಾಜಿಕ ಸಂಗತಿಗಳು ರೂಪಿಸಿದ್ದಾರೆ; ಆಂತರ್ಯವನ್ನು ಮಾತ್ರ ಮಾನವತಾವಾದಕ್ಕೆ ಬದ್ಧವಾದ ಆಧ್ಯಾತ್ಮಿಕ ಅಂಶಗಳು ರೂಪಿಸಿವೆ.ಹೀಗೆ ಲೌಕಿಕ-ಅಲೌಕಿಕಗಳನ್ನು ಸಮಾನಾಂತರವಾಗಿ ಸ್ಪರ್ಶಿಸುತ್ತಲೇ, ಓದುಗನನ್ನು ಒಂದು ಆರೋಗ್ಯಪೂರ್ಣ ಮನಃಸ್ಥಿತಿಗಾಗಿ ಸನ್ನದ್ಧಗೊಳಿಸುತ್ತಾರೆ.

    ಸಿಟ್ಟು- ಸಮಾಧಾನ ಎರಡನ್ನೂ ಪ್ರಯೋಗಿಸಿ ವಿದ್ಯಾರ್ಥಿಯನ್ನು ತಿದ್ದುವ ಮಾಸ್ತರ'ನಂತೆ ಈ ಬದುಕು, ಈ ನಂಬಿಕೆ, ಈ ದೇವರು-ಎಂಬುದನ್ನು ನಿಶ್ಯಬ್ದವಾಗಿ ದಾಟಿಸುತ್ತ, ನಮ್ಮೊಳಗನ್ನು ಬಗೆದು ನೋಡಿಕೊಳ್ಳುವಂತೆ ಮೆಲುದನಿಯಲ್ಲಿ,ಆದರೆ ಅಷ್ಟೇ ಪರಿಣಾಮಕಾರಿಯಾಗಿ ಈ ಕಥೆಗಳು ಒತ್ತಾಯಿಸುತ್ತಿವೆ. 

                                                                                                                                                                                          - ಡಾ.ಚಿದಾನಂದ ಸಾಲಿ

ಚಿಂತಾಮಣಿ ಕೊಡ್ಲೆಕೆರೆ

16 other products in the same category:

Product added to compare.