ಕೆ.ಎನ್. ಗಣೇಶಯ್ಯ ಕನ್ನಡದ ಕಾದಂಬರಿಕಾರರಾಗಿಯಷ್ಟೆ ಹೆಸರು ಮಾಡಿದವರಲ್ಲ. ಮೂಲತಃ ಅವರು ವಿಜ್ಞಾನಿ. ಜೀವವಿಕಾಸದ ತತ್ವಗಳನ್ನು ಮನುಷ್ಯ, ಪ್ರಾಣಿ, ಸಸ್ಯಗಳ ವರ್ತನೆಯ ಹಿನ್ನಲೆಯಲ್ಲಿ ಶೋಧಿಸುವುದು ಅವರ ಸಂಶೋಧನಾಸಕ್ತಿ. ಹೀಗಾಗಿ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ, ವರ್ತನಾಶಾಸ್ತ್ರಕ್ಕೆ ಅವರಿಂದ ಅಮೂಲ್ಯ ಕೊಡುಗೆ ಲಭಿಸಿದೆ. ಮನೋಗಮ ಹೆಸರೇ ಸೂಚಿಸುವಂತೆ ಮುಖ್ಯವಾಗಿ ಪ್ರಜ್ಞೆ ಮನಸ್ಸು, ನಡವಳಿಕೆಗಳನ್ನು ಕುರಿತಾದ ಸ್ವಾರಸ್ಯಕರ ವಿಚಾರಗಳನ್ನು ಒಳಗೊಂಡಿದೆ.'ನಾವೇಕೆ ದ್ವೇಷಿಸುತ್ತೇವೆ', 'ಪ್ರಜ್ಞೆ ನಿನ್ನ ಸೊತ್ತಲ್ಲ ಎಂದ ಇರುವೆಗಳು', 'ನಮ್ಮ ನಿಮ್ಮೊಳಗಿನ ರಾವಣ', 'ನಾನು ಎಂಬ ನಂಬಿಕೆ' ಮುಂತಾದ ಲೇಖನಗಳು ಜೀವ ಜಗತ್ತಿನಲ್ಲಿ ಮನಸ್ಸು ಪ್ರಜ್ಞೆಗಳ ಪಾತ್ರವನ್ನು ಕುತೂಹಲಕಾರಿಯಾಗಿ ನಿರೂಪಿಸುವುದು ಮಾತ್ರವಲ್ಲ ನಮ್ಮ  ಅರಿವನ್ನು ವಿಸ್ತರಿಸುವ ಲೇಖನಗಳಾಗಿವೆ. 

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.