"ಇದ್ದಕ್ಕಿದ್ದ ಹಾಗೆ ದಿಗ್ಗನೆದ್ದು ನಿಲ್ಲುವ ಕುಂಕುಮಾಂಕಿತರು, ಕೊಡಲಿ ಹಿಡಿದವರು, ಬಾವುಟದವರು, ಹಸಿರು ಹೊದ್ದವರು, ವೀರಕೇಸರಿಗಳು ಆರ್ಭಟಿಸುತ್ತಾರೆ. ನೀರು ಕದಡುತ್ತದೆ, ಗಾಳಿ ಕಲುಷಿತವಾಗುತ್ತದೆ, ಮನಸ್ಸು ಕಳಂಕಿತವಾಗುತ್ತದೆ. ಒಂದೂರನ್ನು ನಾಶ ಮಾಡುವುದು ವಿಷಾನಿಲವೋ? ವಿಚಾರಧಾರೆಯೋ? ಹೊರಗಿನ ಚಂಡ ಮಾರುತವೋ? ಒಳಗಿನ ಜ್ವಾಲಾಮುಖಿಯೋ? ಧರ್ಮವನ್ನು ಕಾಪಾಡುವುದಕ್ಕೆಂದೇ ಹುಟ್ಟಿಕೊಳ್ಳುವ ಧರ್ಮಾಂಧತೆಯೋ? ಜೋಗಿಯವರ "ಚಿಕ್ಕಪ್ಪ" ಕಾದಂಬರಿ ಈ ವಿಚಾರಗಳಿಗೆ ಪ್ರಶ್ನೆಯೂ ಅಲ್ಲ, ಉತ್ತರವೂ ಅಲ್ಲ ದೇಶದ ಬೇಗುದಿಯನ್ನು ಚಿತ್ರಿಸುವ ಕಥಾನಕವಾಗಿದೆ."

ಜೋಗಿ

16 other products in the same category:

Product added to compare.