"ಕೆಲವು ಕಾದಂಬರಿಗಳನ್ನು ಓದಿದ ಒಂದೆರಡು ದಿನಗಳ ತನಕ, ಅದರ ಕಥೆಯು ನಮ್ಮ ತಲೆಯಲ್ಲಿ ಸಣ್ಣಗೆ ರಿಂಗಣಗುಡುತ್ತಿರುತ್ತದೆ. ಈ ಕಾದಂಬರಿಯನ್ನು ಓದಿದಾಗ ನನಗೂ ಹಾಗನಿಸಿತು! ದೆಹಲಿಯಲ್ಲಿ ನಡೆದ 1984ರ ಗಲಭೆ, 1947-48 ರ ಸಮಯದಲ್ಲಿ ದೇಶ ವಿಭಜನೆಯ ದಳ್ಳುರಿಯಲ್ಲಿ ನಡೆದ ಹತ್ಯಾಕಾಂಡ, 1948 ರಲ್ಲಿ ಮಹಾತ್ಮಗಾಂಧಿಯವರ ಕೊಲೆಯಾದಾಗ ಮುಂಬಯಿಯಲ್ಲಿ ನಡೆದ ಜನಾಂಗೀಯ ಗಲಭೆ ಮೊದಲಾದ ವಿವರಗಳನ್ನು ಇಲ್ಲಿನ ಕಥೆಯಲ್ಲಿ ತರಲು ನಡೆಸಿರುವ ಪ್ರಯತ್ನ ಮೆಚ್ಚುಗೆಯಾಯಿತು. ನಮ್ಮ ದೇಶದ ಒಟ್ಟೂ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹಣಿಕಿ ಹಾಕಿದ ಈ ರೀತಿಯ ಹಿಂಸಾಕಾಂಡಕ್ಕೆ ಕಾರಣ ಎನಿಸಿದವರು, ಭಾರತದ ನಾಗರಿಕರು ಎಂಬ ಸತ್ಯವನ್ನು ಈ ಕಾದಂಬರಿ ಹೇಳಲು ಪ್ರಯತ್ನಿಸುತ್ತಿದೆ."

                                                                                                                                   -ವಿಶ್ವೇಶ್ವರಭಟ್.

ಶಶಿಧರ ಹಾಲಾಡಿ

16 other products in the same category:

Product added to compare.