ಈ ನಾಟಕ ಒಬ್ಬ ಯಃಕಶ್ಚಿತ್ ಮನುಷ್ಯ ತನ್ನ ಕನಸುಗಾರಿಕೆಯ ಬೆನ್ನು ಹತ್ತಿದ, ಇತಿಹಾಸದಲ್ಲಿ ಒಬ್ಬನಾಗಬೇಕೆಂದು ಹಲವು ಹಾದಿಗಳನ್ನು ಹುಡುಕಿದ ಮಾನವೀಯ ಅನ್ವೇಷಣೆಯ ಕಥೆಯನ್ನು ದಾಖಲಿಸಿದೆ. ಈತ ಕಷ್ಟ ಮತ್ತು ಕನಸುಗಳನ್ನು ಒಟ್ಟೊಟ್ಟಿಗೇ ತೂಗಿಸಿಕೊಂಡು ಹೋಗುವ ಚಾಪ್ಲಿನ್ ಮಾದರಿಯ ಸಾಹಸಿ. ಮೇಲ್ನೋಟಕ್ಕೆ ಮಹಾದಡ್ಡ, ಆದರೆ ಆಂತರಿಕವಾಗಿ ಅಪ್ರತಿಮ ಬುದ್ಧಿಶಾಲಿ. ಸಮಾಜದ ಕಣ್ಣಿನಲ್ಲಿ ಈತನ ಬದುಕಿನ ಪ್ರತಿ ಪ್ರಸಂಗವೂ ಒಂದೊಂದು ಸೋಲು; ಆದರೆ ಈತನಿಗೆ ಅದು ಪ್ರತಿಯೊಂದೂ ದಿಗ್ವಿಜಯ. ಈ ಕಷ್ಟ-ಕನಸು, ದಡ್ಡತನ-ಬುದ್ಧಿವಂತಿಕೆ, ಸೋಲು-ದಿಗ್ವಿಜಯಗಳ ಘರ್ಷಣೆಯಲ್ಲಿ ನಾಟಕ ಚಲನಶೀಲವಾಗಿದೆ. ತುಕ್ರ ಯಾವುದೋ ಒಂದು ವರ್ಗ, ಜಾತಿ, ಸಿದ್ಧಾಂತದ ಪ್ರತಿಮೆಯಾಗದೇ ಜೀವಂತವಾದ ಮಾನವಮೂರ್ತಿಯಾಗಿದ್ದಾನೆ.-ಟಿ.ಪಿ. ಅಶೋಕ

ಚಂದ್ರಶೇಖರ ಕಂಬಾರ

16 other products in the same category:

Product added to compare.