ಪುಸ್ತಕಕ್ಕೆ ಪೀಠಿಕೆಯಾಗಿ ಎ.ಎನ್ ನಾಗರಾಜ್ ರವರು  ಹೇಳಿರುವ ಮಾತುಗಳು ಹೀಗಿವೆ:

ನಾನು ಈಗ ನನ್ನ 95ನೆಯ ವರ್ಷಕ್ಕೆ ಕಾಲಿಟ್ಟಿರುವ ಜೀವಶಾಸ್ತ್ರದ ಪಿಎಚ್.ಡಿ ಪದವೀಧರ. ಸಸ್ಯಗಳ ವೈರಸ್ಸು ಕಾಯಿಲೆಗಳ ಬಗ್ಗೆ ಭಾರತದಲ್ಲಿ, ಅಮೆರಿಕಾದಲ್ಲಿ ಮತ್ತು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ತಜ್ಞ ವಿಜ್ಞಾನಿಯಾಗಿ ಫಿಲಿಪೈನ್ಸ್ ದೇಶದಲ್ಲಿ ಹೀಗೆ ಒಟ್ಟು 15 ವರ್ಷಗಳು ಸಂಶೋಧನೆಗಳನ್ನು ಮಾಡಿದ್ದೇನೆ. ನಂತರ ಸುಮಾರು 44 ವರ್ಷಗಳು ಸಾವಯವ ಕೃಷಿಯಲ್ಲಿ, ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ಮತ್ತು ರೋಗ ನಿವಾರಕ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ತಂದೆ ಪ್ರಖ್ಯಾತ ಸಾಹಿತಿ ಮೂರ್ತಿ ರಾಯರು, ಪ್ರೀತಿಯ ಮೂರ್ತಿ ತಾಯಿ ಜಯಮ್ಮ, ಅನೇಕ ಬಂಧುಮಿತ್ರರು, ಆಧ್ಯಾತ್ಮಿಕ ಗುರುಗಳ ಪ್ರವಚನಗಳು ಇವೆಲ್ಲದರಿಂದ ಕಲಿತ ಪಾಠಗಳು ನನ್ನ ಜೀವನದಲ್ಲಿ ಹೆಚ್ಚು ಆನಂದ ತೃಪ್ತಿಗಳನ್ನು ಕೊಟ್ಟಿವೆ. ಇವೆಲ್ಲ ವಿಷಯಗಳಲ್ಲಿ ನನಗಾಗಿರುವ ಅನುಭವಗಳ ಕಥನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಡಾ. ಎ.ಎನ್. ನಾಗರಾಜ್

16 other products in the same category:

Product added to compare.