ವಿನೋದ ಸಾಹಿತ್ಯ ಪ್ರಕಾರಕ್ಕೆ ಒಂದು ಹೊಸ ಆಯಾಮವನ್ನೇ ಇಟ್ಟಿರುವ ಬೀಚೀ ಅವರ ಹಾಸ್ಯ ಪ್ರಜ್ಞೆ, ಸರಳ ಸ್ವಭಾವ ಹಾಗೂ ನಿರ್ಲಿಪ್ತ ಮನೋಭಾವ ಅಪೂರ್ವವಾದುದು. ಹಾಸ್ಯದ ಮಾತುಗಳಿಂದ ಜನ ಸಮುದಾಯವನ್ನು ನಗಿಸುವುದಷ್ಟೆ ಬೀಚಿ ಅವರ ಉದ್ದೇಶವಾಗಿರಲಿಲ್ಲ. ಸಮಾಜಕ್ಕೆ ಸೂಕ್ತ ಸಂದೇಶವನ್ನು ಕೊಡುವ ತನ್ಮೂಲಕ ಸಮಾಜವನ್ನು ಎಚ್ಚರಿಸುವ ಕಾಳಜಿ ಬೀಚಿ ಅವರಲ್ಲಿತ್ತು. ವಿಡಂಬನ ಶೈಲಿಯಲ್ಲಿರುವ ಇವರ ಕಾದಂಬರಿ, ನಾಟಕ, ಕಥೆ, ಕವನ, ಹರಟೆ, ಆತ್ಮಚರಿತ್ರೆ ಎಲ್ಲವೂ ಇಂದಿಗೂ ಜನರಿಂದ ಓದಿಸಿಕೊಳ್ಳುತ್ತಿವೆ. ಬೀಚೀ ಬುಲೆಟ್ಸ್, ಬಾಂಬ್ಸು, ಭಗವದ್ಗೀತೆ - ಬೀಚೀ ಅವರ ಸಾಹಿತ್ಯಕ್ಕೆ ಒಂದು ಪ್ರವೇಶಿಕೆ ಇದ್ದಂತೆ. ಆ ಮೂಲಕ ಬೀಚೀ ಅವರ ಬಗ್ಗೆ ಒಂದು ಚಿತ್ರಣ ಸಿಗುವಂತೆ ಇಲ್ಲಿ ಪ್ರಯತ್ನಿಸಲಾಗಿದೆ.

ಸಂ:ಬಿ.ಎಸ್. ಕೇಶವರಾವ್

16 other products in the same category:

Product added to compare.