`ಪಡುಕಡಲ ತಡಿಯಲ್ಲಿ' ಒಂದು ವಿಶಿಷ್ಟ ಕೃತಿ. ಕೋಟದ 14 ಗ್ರಾಮಗಳಲ್ಲಿ ಕಂಡು ಬರುವ `ಕೂಟ ಬ್ರಾಹ್ಮಣ' ಸಮಾಜಕ್ಕೆ ಸೇರಿದ ಶ್ರಮಜೀವಿಗಳು, ಬುದ್ಧಿವಂತರು, ಸ್ನೇಹಪರರು ಆದ ಸಂಸಾರದ ಮೂರು ತಲೆಮಾರುಗಳ ಒಂದು ಚಿತ್ರಣವನ್ನು ಈ ಕಾದಂಬರಿ ನೀಡುತ್ತದೆ. ಸಮಕಾಲೀನ ಚರಿತ್ರೆಯು ಈ ನಿರೂಪಣೆಯಲ್ಲಿ ಸಾಕ್ಷಾತ್ಕಾರವಾಗಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಧಾನ್ಯ ಸಂಗ್ರಹಣೆಯ ಪರಿ, ಕಡಲ ತೀರಕ್ಕೆ ತೊಗರಿಬೇಳೆ ಸಾರಿನ ಪ್ರವೇಶ, ಡೀಸೆಲ್ ಇಂಜಿನ್ ಆಗಮನ, ಕಾಫಿ ರುಚಿ ವ್ಯಸನವಾದ ಬಗೆ - ಇವು ಚರಿತ್ರೆಯನ್ನು ದಾಖಲಿಸುತ್ತವೆ. ತೀರ್ವೆ ಹಣ ಪಾವತಿಸದ ರೈತರಿಗೆ ಅವರ ಅಂಡಿನ ಮೇಲೆ ಬರೆ ಹಾಕಲು ಹೇಳಿದಾಗ ಬಡತನದ ಕಾರಣದಿಂದಾಗಿ ರೈತರೆಲ್ಲರು ತಾವುಟ್ಟ ಪಾಣಿಪಂಚೆಯನ್ನು ಮೇಲಕ್ಕೆತ್ತಿ ನಿಲ್ಲುವ ಪ್ರಸಂಗವಂತೂ ಹೃದಯ ಕಲಕುವಂತದ್ದು. ಬಡವರ ಸ್ಥಿತಿಯ ಈ ಮನಃಕರಗುವ ಚಿತ್ರಣವನ್ನು ಅತ್ಯಂತ ಸಶಕ್ತವಾಗಿ ಈ ಕಾದಂಬರಿ ನೀಡುತ್ತದೆ.''-ಪುಂಡಲೀಕ ಹಾಲಂಬಿ

ಡಾ| ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳ್

16 other products in the same category:

Product added to compare.