ಕರ್ಕಿ ಕೃಷ್ಣಮೂರ್ತಿ ಕನ್ನಡದ ಯುವಬರಹಗಾರರಲ್ಲಿ ಗಮನಾರ್ಹ ಹೆಸರು.ಅವರು ತಮ್ಮ ಈ ಕಥಾ ಸಂಕಲನ 'ದಿಬ್ಬದಿಂದ ಹತ್ತಿರಕ್ಕೆ ಆಗಸಕ್ಕೆ' ಕುರಿತು ಹೇಳಿರುವ ಮಾತುಗಳು ಹೀಗಿವೆ.

"ತನಗೆ ಬೇಕಿರುವುದೇನೆಂಬ ಸ್ಪಷ್ಟ ಅರಿವಿಲ್ಲದೇ ಅದಕ್ಕಾಗಿ ಅರಸುವುದು ಆಧುನಿಕ ಮನುಷ್ಯನ ಲಕ್ಷಣವಾಗಿದೆ.ಸತ್ಯ ಶೋಧನೆಯ ಹಾದಿಯಲ್ಲಿ ನಮ್ಮ  ಪೂರ್ವಿಕರು ಕಂಡುಕೊಂಡಿದ್ದ 'ನೇತಿ, ನೇತಿ'ಎನ್ನುವ ತತ್ವ ಪ್ರಯೋಗವನ್ನು:ನಾವಿಂದು,'ಇದಲ್ಲ ಇದೂ ಅಲ್ಲ'ಅನ್ನುತ್ತ ನಮ್ಮ ಸುಖದ ಅನ್ವೇಷಣೆಗೆ ಅಳವಡಿಸಿಕೊಂಡಿದ್ದೇವೆ.ಇರದಿರುವುದೇನೆಂದು ಗೊತ್ತಿಲ್ಲದೇ ತುಡಿಯುವ ಈ ಸ್ಥಿತಿ ವಿಭಿನ್ನ, ತೀಕ್ಷ್ಣ.ಸಾಲದೆಂಬಂತೆ ಜಾಗತೀಕರಣ,ನಗರವಾಸ ,ಕಾರ್ಪೊರೇಟ್ ವ್ಯವಸ್ಥೆ ಇತ್ಯಾದಿಗಳು ಆ ತುಡಿತದ ಕಾವಿಗೆ ಉರುವಲಾಗಿವೆ ಇಂದು.ಸಪ್ತ ಸಾಗರದಾಚೆಯ ದೇಶವೂ ನಮ್ಮ ನೆರೆಮನೆಯಷ್ಟೇ ಹತ್ತಿರವೆನಿಸಬಹುದಾದ ಕಾಲಘಟ್ಟದಲ್ಲೂ,ಈ ವಿದೇಶದ ಆಕರ್ಷಣೆ ನಮ್ಮಲ್ಲಿನ್ನೂ ಮಾಸಿಲ್ಲ.ಇದೂ ಆ ಅರಸುವಿಕೆಯ ಒಂದು ಭಾಗವೇ ಆಗಿರಬಹುದು.ಅಂಥಹುದೇ ಹುಡುಕಾಟದ,ವಿದೇಶಿ ನೆಲದ ಕಥೆಗಳೇ ಹೆಚ್ಚಿರುವ ಈ ಸಂಗ್ರಹಕ್ಕೆ'ದಿಬ್ಬದಿಂದ ಹತ್ತಿರ ಆಗಸಕ್ಕೆ'ಎನ್ನುವ ಹೆಸರು ಸೂಕ್ತ ಎನಿಸಿತು ನನಗೆ".

ಕರ್ಕಿ ಕೃಷ್ಣಮೂರ್ತಿ

16 other products in the same category:

Product added to compare.