ಇದೊಂದು ಸಂಭ್ರಮದ ಸಂದರ್ಭ. ಕವಿ ಲಕ್ಷ್ಮಣ್ರಾವ್ ಅವರ ಗೆಳೆಯರಿಗೆ,ಅಭಿಮಾನಿಗಳಿಗೆ; ಗೋಪಿಯ ಹಾಗೂ ಗಂಡಲೀನಳ ಹಿತೈಷಿಗಳಿಗೂ ಕೂಡ. ಇಬ್ಬರ ಅಭಿಮಾನಿಗಳೂ ಒಂದೇ ವರ್ಗಕ್ಕೆ ಸೇರಿದವರೇ,ಗೊತ್ತಿಲ್ಲ. ಏನೇ ಇರಲಿ,ಕವನ ಸಂಕಲನವೊಂದಕ್ಕೆ 50 ವರ್ಷ ತುಂಬುವುದು,ಆ ಸಂಕಲನದ ಕವಿ ಈಗಲೂ ಸಂವೇದನಾಶೀಲವಾಗಿ ಬರೆಯುತ್ತಿರುವುದು ಕನ್ನಡ ಕಾವ್ಯಪ್ರಿಯರಿಗೆ ನಿಜಕ್ಕೂ ಸಂತೋಷದ ಸಂಭ್ರಮದ ವಿಷಯ. ನಿಜವಾಗಿ ಹೇಳಬೇಕೆಂದರೆ ಇಂತಹ ಸಂಭ್ರಮದ ಕ್ಷಣಗಳಲ್ಲಿ ವಿಮರ್ಶೆ, ವ್ಯಾಖ್ಯಾನ, ಅಭಿಪ್ರಾಯಗಳಿಗೆ ಯಾವ ರೀತಿಯ ಪಾತ್ರವೂ ಇಲ್ಲ. ಹೀಗಿದ್ದೂ ಕವಿ, ಪ್ರಕಾಶಕ ಇಬ್ಬರಿಗೂ ಹೊಸ ತಲೆಮಾರಿನವರ ಸ್ಪಂದನವನ್ನು ಕೂಡ ಈ ಸಂಭ್ರಮದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂಬ ಭಾವನೆ ಇರುವುದು ಕಾವ್ಯರಸಿಕರ, ಕಾವ್ಯಲೋಕದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾದದ್ದು. 

                                                                                                                                                       ಕೆ. ಸತ್ಯನಾರಾಯಣ

ಬಿ.ಆರ್. ಲಕ್ಷ್ಮಣ್‍ರಾವ್

16 other products in the same category:

Product added to compare.