ನನ್ನ ಮಟ್ಟಿಗೆ ಈ ಅಂಕಣ ಅಕ್ಷರಗಂಗೆ. `ನೂರೆಂಟು ಮಾತು' ನೆಪದಿಂದ ಅನೇಕರನ್ನು ಭೇಟಿಯಾಗಿದ್ದೇನೆ, ಅಸಂಖ್ಯ ಊರುಗಳನ್ನು ಸುತ್ತಿದ್ದೇನೆ. ನೂರಾರು ಪುಸ್ತಕಗಳನ್ನು ಓದಿದ್ದೇನೆ. ಹಲವು ಸಿನಿಮಾ ನೋಡಿದ್ದೇನೆ. ಅನೇಕರಿಗೆ ಕಿವಿಕೊಟ್ಟು ದಿನಗಟ್ಟಲೆ ಆಲಿಸಿದ್ದೇನೆ, ಅವೆಲ್ಲವುಗಳನ್ನೂ ಈ ಅಂಕಣದಲ್ಲಿ ಬಸಿದಿದ್ದೇನೆ. `ನೂರೆಂಟು ಮಾತು' ನನ್ನ ಮನಸ್ಸಿನ ಹುಲ್ಲುಗಾವಲು ಅಥವಾ ಹೂದೋಟ. ಈ ಅಂಕಣದ ಮೂಲಕ ನಾನು ಓದುಗರಿಗೆ ಏನು ಕೊಟ್ಟೆ ಎಂಬುದಕ್ಕಿಂತ, ಇದರಿಂದ ನಾನು ಪಡೆದಿದ್ದೇ ಜಾಸ್ತಿ. `ನೂರೆಂಟು ಮಾತು' ನನ್ನನ್ನು ಕೈಹಿಡಿದು ನಡೆಸಿದೆ. ನಾನೊಬ್ಬ ದಾರಿಹೋಕ - ಎನ್ನುವ ವಿಶ್ವೇಶ್ವರ ಭಟ್ ರವರ ಜನಪ್ರಿಯ ಅಂಕಣ ಬರಹಗಳ ಸಂಕಲನ.

ವಿಶ್ವೇಶ್ವರ ಭಟ್

16 other products in the same category:

Product added to compare.