"ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಯ ವಿಚಾರದಲ್ಲಿ ವಿಶ್ವೇಶ್ವರಯ್ಯನವರ ಪ್ರಯತ್ನ ಯಾವ ಮಟ್ಟದ್ದು ಎಂಬುದನ್ನು ಸೂಕ್ತ ಸಂಶೋಧನೆಯಿಂದ, ಸಮಗ್ರ ಆಧಾರಗಳ ನಿಷ್ಪಕ್ಷಪಾತ ಅವಲೋಕನದಿಂದ, ಸತ್ಯದ ಪ್ರಮಾಣಬದ್ಧ ನಿರೂಪಣೆಗಳಿಂದ ಮಂಡಿಸುವ ಈ ಕೃತಿ ವಿಶೇಷ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಸ್ವತಃ ಮೈಸೂರು ಮಹಾರಾಜರೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಈ ರೀತಿ ಹೇಳಿದರು - "ಶ್ರೀ ವಿಶ್ವೇಶ್ವರಯ್ಯನವರ ಅನುಪಮ ದೇಶಭಕ್ತಿ, ಅಪರಿಮಿತ ಉತ್ಸಾಹ ಮತ್ತು ಹಿಡಿದ ಕೆಲಸಗಳಿಂದ ಹಿಮ್ಮೆಟ್ಟದ ಸ್ವಭಾವಗಳಿಂದಾಗಿ ಒಂದು ಕಾಲದಲ್ಲಿ ಕೇವಲ ಕನಸಾಗಿದ್ದ ಈ ವಿಶ್ವವಿದ್ಯಾಲಯವು ಇಂದು ನನಸಾಗಿ ನಮ್ಮೆದುರು ಸಾಕಾರವಾಗಿದೆ".

ಡಾ| ಗಜಾನನ ಶರ್ಮ

16 other products in the same category:

Product added to compare.